ಆನೆಗಳಿಂದ ಆಗಬೇಕಿದೆ ಮಿಡಿತಗಳ ಹಾವಳಿಗೆ ತಡೆ
ಭಾರತದ ಹಳ್ಳಿಗಳು ಕೃಷಿ ಆದಾರಿತವಾದ ದೇಶ. ಕೊರೋನಾ ಬಂದ ಕಾಲದಲ್ಲೆ ಮಿಡಿತಗಳ ಹಾವಳಿ ಸಾಗಿ ಬಂದಿದೆ. ಮಿಡಿತಗಳ ಉಪಟಳ ನೀಗಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಗಾದೆ ಮಾತಿನಂತೆ ಕಷ್ಟಗಳು ಆನೆಗಳ ಹಾಗೆ ತಂಡೋಪತಂಡವಾಗಿ ಅಪ್ಪಳಿಸಿರುವುದು ಭಾರತಕ್ಕೆ ಭೀತಿ ಒಡ್ಡಿದೆ. ಭಾರತದ ಉತ್ತರದಲ್ಲಿ ಸೊಳ್ಳೆಕಾಟ, ದಕ್ಷಿಣದಲ್ಲಿ ಹೊರದೇಶದಿಂದ ಮರಳಿ ಬರುವವರ ಕಾಟ, ಪೂರ್ವದಲ್ಲಿ ಅಂಫಾ಼ನ್ ಚಂಡಮಾರುತದ ಕಾಟ ಮತ್ತು ಪಶ್ಟಿಮದಲ್ಲಿ ಮಿಡಿತಗಳ ಕಾಟ-ಹೀಗೆ ಭಾರತೀಯರು ಚತುಶ್ಬಂಧನಕ್ಕೆ ಒಳಗಾಗಿದ್ದಾರೆ. ಮಿಡಿತಗಳು ಸಾವಿರಾರು ಎಕರೆಯಷ್ಟು ಪ್ರದೇಶ ತಿನ್ನುವುದರಿಂದ ಲಕ್ಷಾಂತರ ಜನರ ಆಹಾರ ನಾಶವಾಗಲಿದೆ. ದಿಕ್ಕು ತೋಚದ ರೈತರು ನಾನಾ ರೀತಿಯ ಪ್ರಯೋಗಕ್ಕೆ ಕೈಹಾಕಿದ್ದಾರೆ. ನನ್ನ ಅಭಿಪ್ರಾಯದ ಪ್ರಕಾರ ನಾವು ಆನೆಗಳನ್ನು ಕರ್ನಾಟಕದ ಗಡಿ ಜಿಲ್ಲೆಗಳಿಗೆ ಕರೆತಂದು ನಮ್ಮ ಗದ್ದೆಗಳನ್ನು ನಾವೇ ಉಣಬಡಿಸಬೇಕು. ಆನೆಗಳು ಬಹು ಭೋಜನಪ್ರಿಯ ಸಸ್ಯಹಾರಿಗಳು. ಆನೆಗಳು ಈ ಗದ್ದೆಗಳನ್ನು ತಿನ್ನುವ ಮೂಲಕ ಮಿಡಿತಗಳಿಗೆ ಆಹಾರವು ಒದಗದೆ ಸಂತತಿ ವೃದ್ಧಿಯು ಕುಂಟಿತವಾಗಲಿದೆ. ನಂತರ ಮಿಡಿತಗಳು ಆನೆಗಳ ಆಹಾರ ಭಕ್ಷಣೆಯ ವೇಗಕ್ಕೆ ಸೋತಿದ್ದಾಗ ಔಷಧ ಸಿಂಪಡಿಸಿ ನಿಯಂತ್ರಿಸಬಹುದು. ಆನೆಗಳು ಅಮಿತ ಆಹಾರವನ್ನು ಮಿತ ಕಾಲಾವಧಿಗೆ ಸೇವಿಸುವ ನುರಿತ ಜೀವಿಗಳು. ಇದೇ ಅಲ್ಲದೆ ಆನೆ ಲದ್ದಿಯನ್ನು ನಮ್ಮ ಗದ್ದೆಗಳಿಗೆ ಸರಿಯಾದ ಪೌಷ್ಟಿಕೀಯ ಗೊಬ್ಬರವಾಗಿ ಬಳಸಿ ಮತ್ತೆ ಅಲ್ಪಾವಧಿಯಲ್ಲಿ ಅಧಿಕ ಇಳುವರಿ ಗಳಿಸ...